ತುಮಕೂರು ಜಿಲ್ಲಾ ಪಂಚಾಯತಿ ಸಭಾಂಗಣದಲ್ಲಿ ಜಗಜ್ಯೋತಿ ಬಸವೇಶ್ವರ ಜಯಂತಿ ಆಚರಣೆ

ತುಮಕೂರು : ತುಮಕೂರು ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಜಗತ್ತಿಗೆ ಜ್ಞಾನದ ದಾರಿತೋರಿ, ಸಮಾಜದ ತಪ್ಪುಗಳನ್ನು ತಿದ್ದಿದ ವಿಶ್ವಗುರು ಭಕ್ತಿ ಭಂಡಾರಿ ಜಗಜ್ಯೋತಿ ಶ್ರೀ ಬಸವೇಶ್ವರರ ಜಯಂತಿ ಅಂಗವಾಗಿ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಭಕ್ತಿಯ ನಮನಗಳನ್ನು ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಾದ ಸನ್ಮಾನ್ಯ ಜೆ.ಸಿ ಮಾಧುಸ್ವಾಮಿ ರವರು ತುಮಕೂರು ಲೋಕಸಭಾ ಸದಸ್ಯರಾದ ಸನ್ಮಾನ್ಯ ಎಂ.ಪಿ. ಬಸವರಾಜ್ ರವರು, ಮಾಜಿ ಸಚಿವರಾದ ಶ್ರೀಯುತ ಶಿವಣ್ಣ ರವರು, ತುಮಕೂರು ಮೇಯರ್ ಶ್ರೀಯುತ ಕೃಷ್ಣಪ್ಪ ರವರು , ವಿಧಾನಪರಿಷತ್ ಸದಸ್ಯರಾದ ಶ್ರೀ ವೈ ಎ ನಾರಾಯಣಸ್ವಾಮಿ,ಶ್ರೀ ಚಿದಾನಂದ ಎಂ ಗೌಡ ರವರು . ಜಿಲ್ಲಾಧಿಕಾರಿಗಳಾದ ಶ್ರೀ ವೈ.ಎಸ್ ಪಾಟೀಲ್, ಉಪವಿಭಾಗಾಧಿಕಾರಿಗಳಾದ ಶ್ರೀ ಯುತ ಅಜಯ್, ಜಿಲ್ಲಾ ಪಂಚಾಯಿತಿ ಆಡಳಿತ ಅಧಿಕಾರಿ ಶ್ರೀ ರಾಕೇಶ್ ಸಿಂಗ್,ಜಿಲ್ಲಾ. ಪಂ.ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶ್ರೀಮತಿ ವಿದ್ಯಾಕುಮಾರಿ, ಪೊಲೀಸ್ ವರಿಷ್ಠಾಧಿಕಾರಿಗಳಾದ ಶ್ರೀ ವಂಶಿಕೃಷ್ಣ ರವರು,DHO ನಾಗೇಂದ್ರಪ್ಪ,ಸುರೇಶ್ ಬಾಬು, ಶ್ರೀ ತಿಪ್ಪೇಸ್ವಾಮಿ, ಮುಂತಾದ ಆಡಳಿತ ಅಧಿಕಾರಿಗಳು ಉಪಸ್ಥಿತರಿದ್ದರು..
ವರದಿ :ಮಂಜುಸ್ವಾಮಿ.ಎಂ.ಎನ್
ರಾಜ್ಯ ವಿಷೇಶ ವರದಿಗಾರರು.
ಸತ್ಯ ವಿಸ್ಮಯ ಪತ್ರಿಕೆ.